ಕಾಶಿ — ಮೋಕ್ಷಭೂಮಿ ಯಾಕೆ? ಮತ್ತು ಇಲ್ಲಿ ಮರಣವನ್ನೇ ಬೇರೆ ರೀತಿಯಾಗಿ ಯಾಕೆ ನೋಡುತ್ತಾರೆ?
ಗಂಗೆಯ ತೀರದಲ್ಲಿ ಬೆಳಗಿನ ಜಾವ. ಮಂಜಿನ ಮಸುಕಿನಲ್ಲಿ ದೀಪಗಳ ಹೊಳಪು, ಮಂತ್ರಗಳ ನಾದ, ಭಕ್ತರ ಪ್ರಾರ್ಥನೆಗಳು.
ಗಂಗಾ ನದಿ ತೀರದಲ್ಲಿ ನೂರಾರು ಯಾತ್ರಿಕರು ಹಾಗೂ ಭಕ್ತರು ಸ್ನಾನಮಾಡುತ್ತಾ, “ಹರ ಹರ ಮಹಾದೇವ” ಎಂದು ಜಪಿಸುತ್ತಾರೆ.
ನಂಬಿಕೆಯಂತೆ, ಕಾಶಿಯಲ್ಲಿ ಮರಣಗೊಳ್ಳುವವರ ಬಲ ಕಿವಿಗೆ ಭಗವಾನ್ ಶಿವನು “ತಾರಕ ಮಂತ್ರ” ಹೇಳುತ್ತಾನೆ. ಆ ಮಂತ್ರವೇ ಆತ್ಮಕ್ಕೆ ಮುಕ್ತಿಯ ದಾರಿ ಎನ್ನುವುದು ಭಕ್ತ ನಂಬಿಕೆ.
“ಕಾಶ್ಯ ಮರಣಂ ಮುಕ್ತಿ” ಎಂಬ ವಾಕ್ಯವು ಪ್ರತಿಯೊಬ್ಬರ ಹೃದಯದಲ್ಲಿ ಪ್ರತಿಧ್ವನಿಸುತ್ತದೆ ಯಾಕೆಂದರೆ ಕಾಶಿಯಲ್ಲಿ ಮರಣವು ಅಂತ್ಯವಲ್ಲ, ಶಾಶ್ವತ ಶಾಂತಿಯ ಪ್ರವೇಶ.
ಹಿರಿಯರು ತಮ್ಮ ಕೊನೆಯ ದಿನಗಳನ್ನು ಮುಖ್ತಿಭವನದಲ್ಲಿಕಳೆಯುತ್ತಾರೆ. ಯಜ್ಞ, ಭಜನೆ, ಪ್ರಾರ್ಥನೆಗಳ ನಡುವೆ ಆತ್ಮವು ತನ್ನ ಅಂತಿಮ ಯಾತ್ರೆಗೆ ಸಿದ್ಧವಾಗುತ್ತದೆ.
ಮರಣದ ಅರ್ಥ ಕಾಶಿಯಲ್ಲಿ ಮರಣವು ಭಯವಲ್ಲ ಅದು ಆತ್ಮದ ಪರಿಪೂರ್ಣ ಪ್ರವೇಶ, ಸಂಸಾರದ ಬಂಧನದಿಂದ ಮುಕ್ತಿ.
0 Comments
If you have any doubts let me know